ಕಂಕನಾಡಿ ವಾರ್ಡ್ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ – ಶಾಸಕ ಕಾಮತ್
ಕಂಕನಾಡಿ ವಾರ್ಡ್ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ – ಶಾಸಕ ಕಾಮತ್
ಮಂಗಳೂರು: ಮಹಾನಗರ ಪಾಲಿಕೆ ವತಿಯಿಂದ ಕಂಕನಾಡಿ ವಾರ್ಡಿಗೆ 1.71 ಕೋಟಿ ರೂ. ಅನುದಾನ ಈಗಾಗಲೇ ಬಿಡುಗಡೆಯಾಗಿದೆ ಎಂದು ಮಂಗಳೂರು ನಗರ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಕೊನೆಗೊಂಡ ನಂತರ ಸಾರ್ವಜನಿಕರ ಕೋರಿಕೆಯ ಮೇರೆಗೆ ಲೋಕೋಪಯೋಗಿ ಇಲಾಖೆ, ಕೇಂದ್ರ ಸರಕಾರದ 14ನೇ ಹಣಕಾಸು ಅನುದಾನ ವ್ಯವಸ್ಥೆ, ಮಹಾನಗರ ಪಾಲಿಕೆ ಸಾಮಾನ್ಯ ನಿಧಿ, ಮಳೆಹಾನಿ, ಮುಖ್ಯಮಂತ್ರಿ ವಿಶೇಷ ಅನುದಾನ,ಶಾಸಕರ ನಿಧಿ ಮುಂತಾದ ವಿವಿಧ ಅನುದಾನಗಳನ್ನು ಜೋಡಿಸಿ ಸರಿ ಸುಮಾರು 26 ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಿರುವುದಾಗಿ ಶಾಸಕರು ತಿಳಿಸಿದ್ದಾರೆ.
ವೆಚ್ಚದಲ್ಲಿ ಪಂಪ್ವೆಲ್ 1ನೇ ಅಡ್ಡ ರಸ್ತೆಯಲ್ಲಿ ಕಾಲುದಾರಿಗೆ ತಡೆಗೋಡೆ ನಿರ್ಮಾಣ ಹಾಗೂ 5 ಲಕ್ಷ ರೂ ವೆಚ್ಚದಲ್ಲಿ ಅಳಪೆ ಮಠದ ಮುಖ್ಯ ರಸ್ತೆಯಿಂದ ರಾಜಕಾಲುವೆಗೆ ಕಾಲು ಸಂಕ ನಿರ್ಮಾಣದ ಕಾಮಗಾರಿಗಳನ್ನು ಮಾಡಲಾಗುವುದು ಎಂದಿದ್ದಾರೆ.
ಮಳೆಹಾನಿ ಪರಿಹಾರ ನಿಧಿಯಲ್ಲಿ 3.5 ಲಕ್ಷ ಬಿಡುಗಡೆಯಾಗಿದ್ದು, ಬಜಾಲ್ ನಾಗುರಿಯಲ್ಲಿ ರಸ್ತೆ (150 ಅಡಿ ಉದ್ದ 10 ಅಡಿ ಅಗಲ) ಕಾಂಕ್ರೀಟೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಕಂಕನಾಡಿ ವಾರ್ಡಿಗೆ 81 ಲಕ್ಷ ಮೀಸಲಿಡಲಾಗಿದೆ. ಆ ಅನುದಾನದಲ್ಲಿ ಕಪಿತಾನಿಯೋ – ಪಂಪ್ವೆಲ್ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ 8 ಲಕ್ಷ ರೂ., ಪಂಪ್ವೆಲ್ ಬಳಿಯ ಎಂ.ಐ.ಒ ಕ್ಯಾನ್ಸರ್ ಆಸ್ಪತ್ರೆಗೆ ಸಂಧಿಸುವ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ., ನೆಕ್ಕರೆಮಾರು ಬಳಿ ಕಿರು ಸೇತುವೆ ಹತ್ತಿರ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ, ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯ ರಸ್ತೆ ಬಳಿ ಬೃಹತ್ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ ರೂ., ಪಂಪ್ವೆಲ್ ಬಳಿ ಬೃಹತ್ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ 5 ಲಕ್ಷ ರೂ., ಎಕ್ಕೂರು ಸೇತುವೆಯ ಮುಂದುವರಿದ ಕಾಮಗಾರಿಗೆ 10 ಲಕ್ಷ ರೂ., ಕುಂಟಲಗುಡ್ಡೆ ಕೊರಗಜ್ಜ ದೈವಸ್ಥಾನದ ಬದಿ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗೆ 6 ಲಕ್ಷ ರೂ., ಕುಂಟಲಗುಡ್ಡೆ ಹಿಂದೂ ಯುವಸೇನೆಯ ಕಚೇರಿ ಬಳಿ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗೆ 8 ಲಕ್ಷ ರೂ., ಕುಂಟಲಗುಡ್ಡೆ ಮುಖ್ಯ ರಸ್ತೆ, ಚರಂಡಿ ಅಭಿವೃದ್ಧಿಗೆ 5 ಲಕ್ಷ ರೂ., ಕಾವುಬೈಲ್ ಬದಿ ರಸ್ತೆ, ಚರಂಡಿ ಅಭಿವೃದ್ಧಿಗೆ 5 ಲಕ್ಷ ರೂ., ಕುಂಟಲಗುಡ್ಡೆ ಕೊರಗಜ್ಜ ಕ್ಷೇತ್ರ ಬದಿ ರಸ್ತೆ ಅಭಿವೃದ್ಧಿ ಕಾಮಗಾರಿ 6 ಲಕ್ಷ., ಕುಂಟಲಗುಡ್ಡೆ ಹಿಂದೂ ಯುವಸೇನಾ ಕಚೇರಿ ಬದಿ ಚರಂಡಿ ಅಭಿವೃದ್ಧಿ ಕಾಮಗಾರಿ 8 ಲಕ್ಷ. ಮೀಸಲಿಟ್ಟಿದ್ದು ಶೀಘ್ರದಲ್ಲಿಯೇ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಲ್ಲಿ 38.73 ಲಕ್ಷ ಅನುದಾನ ಈಗಾಗಲೇ ಬಿಡುಗಡೆಗೊಂಡಿದೆ. ಅದರಲ್ಲಿ ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯ ಬದಿ ತಡೆಗೋಡೆ ದುರಸ್ತಿ ಕಾಮಗಾರಿ 4.63 ಲಕ್ಷ., ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ ಗಂಗಾ ಬಡಾವಣೆ ಬಳಿ ಚರಂಡಿ ದುರಸ್ತಿ ಕಾಮಗಾರಿ 4.3 ಲಕ್ಷ., ಎಕ್ಕೂರು ಗುಡ್ಡರಸ್ತೆ ದುರಸ್ತಿ ಕಾಮಗಾರಿ 4.94 ಲಕ್ಷ., ಸದಾಶಿವ ನಗರ ಅಡ್ಡರಸ್ತೆ ದುರಸ್ತಿ ಕಾಮಗಾರಿ 3.43., ದಂಬೆ ಬಳಿ ಚರಂಡಿಯ ತಡೆಗೋಡೆ ನಿರ್ಮಾಣ ಕಾಮಗಾರಿ 16.70 ಲಕ್ಷ. ಮತ್ತು ಕುಂಟಲಗುಡ್ಡೆ,ಎಕ್ಕೂರು ಮೇಲ್ಸೇತುವೆ ಬಳಿ, ಕಂಕನಾಡಿ ರೈಲ್ವೇ ಸ್ಟೇಷನ್ ಒಳರಸ್ತೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಹೊಸ ಎಚ್.ಡಿ.ಪಿ.ಇ ಕೊಳವೆ ಅಳವಡಿಕೆ 5 ಲಕ್ಷ ರೂಪಾಯಿ ವಿನಿಯೋಗಿಸಲಾಗುವುದು ಎಂದರು.
ಕೇಂದ್ರ ಸರಕಾರದ 14ನೇ ಹಣಕಾಸು ಅನುದಾನ ವ್ಯವಸ್ಥೆಯಲ್ಲಿ 15 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು , ನಾಗುರಿಯಿಂದ ಮಜಾಲ್ ರಸ್ತೆಗೆ ಹೋಗುವ ದಾರಿಯಲ್ಲಿ ತಡೆಗೋಡೆ ನಿರ್ಮಾಣವಾಗಲಿದೆ. ಹಾಗೂ ಶಾಸಕರ ನಿಧಿಯಿಂದ 18 ಲಕ್ಷ ರೂಪಾಯಿ ಅನುದಾನ ಮೀಸಲಿಟ್ಟಿದ್ದೇನೆ. ಆ ಅನುದಾನದಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಗುರಿ ಬಿಲ್ಲವ ಸೇವಾ ಸಮಾಜ ಮಂದಿರದ ಮೇಲ್ಛಾವಣಿ ಅಳವಡಿಕೆ, ಗೋರಿಗುಡ್ಡ ಬಸ್ ನಿಲ್ದಾಣ ಬಳಿ ಟೈಲರ್ ಭವನದ ಮುಂದುವರಿದ ಕಾಮಗಾರಿಗೆ 5 ಲಕ್ಷ, ಸಾಯಿಬಾಬಾ ಮಂದಿರದ ಬಳಿ ಅಭಿವೃದ್ಧಿ ಕಾಮಗಾರಿಗೆ 4 ಲಕ್ಷ, ನೆಕ್ಕರೆಮಾರ್ ಕಟ್ಟಪುಣಿಯಲ್ಲಿ ಪರಿಶಿಷ್ಟ ಕಾಲೋನಿ ಅಭಿವೃದ್ಧಿಗೆ 4 ಲಕ್ಷ ಮೀಸಲಿಡಲಾಗಿದೆ. ಸಾರ್ವಜನಿಕರ ಬೇಡಿಕೆಗಳನ್ನು ಪರಿಗಣಿಸಿ ಈ 8 ತಿಂಗಳ ಅವಧಿಯಲ್ಲಿ ಅನೇಕ ಯೋಜನೆಗಳನ್ನು ಮಾಡಿಕೊಂಡಿದ್ದು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುವ ದೃಷ್ಠಿಯಿಂದ ಕಾರ್ಯೋನ್ಮುಖರಾಗಿದ್ದೇವೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Build a career in Digital Marketing with solid foundation.
Learn core marketing and digital tools like Google Adwords, Facebook Ads, SEO, Google Analytics, Social Media Marketing, Website Enhancement, SEO content writing, Pay Per Click. Study on live projects. Hurry up!
Contact us. @ 9900144664 OR
Visit Us @ bluelinecomputers.com
