*ದೇಶದ ರಕ್ಷಣೆ ಹಾಗೂ ಜಿಲ್ಲೆಯ ಅಭಿವೃದ್ಧಿ ಗಾಗಿ ಬಿ ಜೆ ಪಿ ಆಯ್ಕೆ ಮಾಡಿ : ನಳಿನ್ ಕುಮಾರ್ ಕಟೀಲ್ *

*ದೇಶದ ರಕ್ಷಣೆ ಹಾಗೂ ಜಿಲ್ಲೆಯ ಅಭಿವೃದ್ಧಿ ಗಾಗಿ ಬಿ ಜೆ ಪಿ ಆಯ್ಕೆ ಮಾಡಿ : ನಳಿನ್ ಕುಮಾರ್ ಕಟೀಲ್ *

April 7: ಮಂಗಳೂರು : ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ರವರು ಇಂದು ನಗರದ ಪಂಪವೆಲ್ಲ್ ವೃತ್ತ ದ ಬಳಿಯಿಂದ ನಾಗೋರಿ ವರೆಗೆ ಮೈ ಬಿ ಚೋಕಿದಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಸುಮಾರ್ ೧೦೦೦ ಸಾವಿರಕ್ಕೂ ಅಧಿಕ ನರೇಂದ್ರ ಮೋದಿ ಬೆಂಬಲಿಗರು ಕೇಸರಿ ಪೇಟ ತೊಟ್ಟು , ಮೋದಿ ಹಾಗೂ ನಳಿನ್ ಕುಮಾರ್ ಕಟೀಲ್ ಪರ ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು ಬಳಿಕ ಬ್ರಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು ಯುವ ಮತದಾರರು, ವಿದ್ಯಾರ್ಥಿಗಳು ನರೇಂದ್ರ ಮೋದಿಯವರನ್ನೇ ಮತ್ತೆ ಪ್ರಧಾನಿಯಾಗಲು ಬಯಸುತ್ತಾರೆ. ಈ ಬಾರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗುವುದು ನಿಶ್ಚಿತ , ಸತತ ಎರಡು ಬಾರಿ ನನ್ನನ್ನು ಆಯ್ಕೆ ಮಾಡಿ ಜಿಲ್ಲೆಯ ಅಭಿವೃದ್ಧಿ ಕಾರ್ಯ ಮಾಡಲು ಅವಕಾಶ ನೀಡಿದೀರಿ, ಈ ಬಾರಿಯೂ ಕೇಂದ್ರದಲ್ಲಿ ನರೇಂದ್ರ ಮೋದಿ ಯವರ ಸರ್ಕಾರ ರಚನೆಯಾಗಬೇಕಾಗಿದೆ , ದೇಶದ ರಕ್ಷಣೆ ಹಾಗೂ ಜಿಲ್ಲೆಯ ಅಭಿವೃದ್ಧಿ ಗಾಗಿ ಕಮಲದ ಚಿನ್ನೆಗೆ ಮತ ಹಾಕಿ ನನ್ನನು ಚುನಾಯಿಸಬೇಕಾಗಿ ಮತದಾರರಲ್ಲಿ ವಿನಂತಿಸಿದರು .

ಸಾರ್ವಜನಿಕ ಸಭೆಯ ವೇದಿಕೆಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ , ಮಾಜಿ ಶಾಸಕ ಏನ್ ಯೋಗೀಶ್ ಭಟ್ , ನಾಗರಾಜ್ ಶೆಟ್ಟಿ , ನಿತಿನ್ ಕುಮಾರ್ , ರವಿಶಂಕರ್ ಮಿಜಾರ್ , ಮೋನಪ್ಪ ಭಂಡಾರಿ , ರಮೇಶ್ ಕಂಡೇಟು , ಜಿತೇಂದ್ರ ಕೊಟ್ಟಾರಿ , ಪ್ರೇಮಾನಂದ ಶೆಟ್ಟಿ , ಭಾಸ್ಕರ್ ಚಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು .

Latest News
also read