ಮಂಗಳೂರಿನಲ್ಲಿ ಉಪೇಂದ್ರ ಅವರಿಂದ ನೀತಿ ಸಂಹಿತೆ ಉಲ್ಲಂಘನೆ ??

ಮಂಗಳೂರಿನಲ್ಲಿ ಉಪೇಂದ್ರ ಅವರಿಂದ ನೀತಿ ಸಂಹಿತೆ ಉಲ್ಲಂಘನೆ ??

April 4: ಕರಾವಳಿಯಲ್ಲಿ ಚುನಾವಣಾ ರಣ ರಂಗೇರುತಿದ್ದು,ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದು ಪ್ರಚಾರದಲ್ಲಿ ತೊಡಗಿದೆ.ಚುನಾವಣೆ ನೀತಿ ಸಂಹಿತೆಗನುಗುಣವಾಗಿ ಅತ್ಯಂತ ಜಾಗರೂಕತೆಯಿಂದಿರುವ ಪಕ್ಷಗಳು ಎಲ್ಲೂ ಒಂದಷ್ಟು ಸಮಸ್ಯೆ ಉದ್ಭವಿಸದಂತೆ ತಮ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆ,ಇತ್ತ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಅವರು ತಮ್ಮ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಶಾಲಾ ಮಕ್ಕಳಿಗೆ ಕಲ್ಲಂಗಡಿ ಹಣ್ಣು ಹಂಚುವ ಮೂಲಕ ಸುದ್ಧಿಯಾಗಿದ್ದರು.ಸದ್ಯ ಈ ವಿಚಾರದಲ್ಲಿ ಅಪಸ್ವರ ಎದ್ದಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

Latest News